ಆನೇಕಲ್ ಬಾಲರಾಜ್ ನಿರ್ಮಾಣದ, ಪ್ರಭು ಶ್ರೀನಿವಾಸ್ ನಿರ್ದೇಶನದ ‘ಗಣಪ ಚಿತ್ರ ರಾಜ್ಯಾಧ್ಯಂತ ಯಶಸ್ವೀ ಪ್ರದರ್ಶನ ಕಾಣುತ್ತಿರೋದು ಎಲ್ಲರಿಗೂ ತಿಳಿದ ಸಂಗತಿ. ಸಂತೋಷ್ ಬಾಲರಾಜ್ ಅಭಿನಯದ ಈ ಚಿತ್ರದ ಬಗ್ಗೆ ಬಹುತೇಕ ಒಳ್ಳೆ ಅಭಿಪ್ರಾಯ ಕೇಳಿ ಬರುತ್ತಿದೆ. ಇದೀಗ ಛಾಲೆಂಜಿಂಗ್ ಸ್ಟಾರ್ ದರ್ಶನ್ ಈ ಚಿತ್ರ ವೀಕ್ಷಿಸಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ!
ದರ್ಶನ್ ತಮ್ಮ ಬ್ಯುಸಿ ಕೆಲಸಗಳ ನಡುವೆಯೂ ಮೊನ್ನೆ ‘ಗಣಪ ಚಿತ್ರ ವೀಕ್ಷಿಸಿದ್ದರು. ಗಣಪನ ದರ್ಶನ ಮುಗಿಸಿ ಹೊರ ಬಂದ ದರ್ಶನ್ ಅವರ ಮುಖದಲ್ಲಿ ಭಾರೀ ಖುಷಿಯಿತ್ತು. ಈ ಬಗ್ಗೆ ಅವರು ಮುಕ್ತವಾಗಿ ಅಭಿಪ್ರಾಯ ಹಂಚಿಕೊಂಡರಲ್ಲದೆ ಪ್ರಶಂಶೆಗಳ ಮಳೆಗರೆದರು.
‘ಹೆಚ್ಚೂಕಮ್ಮಿ ೨೦ ವರ್ಷಗಳ ನಂತರ ಕನ್ನಡದಲ್ಲಿ ರೌಡಿಸಂನೊಂದಿಗೆ ಸಹಜ ಸೆಂಟಿಮೆಂಟ್ ಮಿಶ್ರಿತವಾದ ಒಂದು ಚಿತ್ರ ಬಂದಿದೆ. ಇದು ನನಗೆ ಅತ್ಯಂತ ಖುಷಿ ಕೊಟ್ಟಿದೆ. ಒಟ್ಟಾರೆಯಾಗಿ ಗಣಪ ಒಂದೊಳ್ಳೆಯ ಚಿತ್ರ. ಇದರ ನಾಯಕ ಸಂತೋಷ್ಗೂ ಉತ್ತಮ ಭವಿಷ್ಯವಿದೆ ಎಂದಿದ್ದಾರೆ.
ಛಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಈ ಪ್ರಶಂಸೆಯ ಮಾತುಗಳಿಂದ ಚಿತ್ರ ತಂಡ ಫುಲ್ಖುಷ್ ಆಗಿದೆ. ತಂಡದ ಉತ್ಸಾಹವೂ ನೂರ್ಮಡಿಸಿದೆ. ಈ ಚಿತ್ರದ ಮೂಲಕ ಸಂತೋಷ್ ಬಾಲರಾಜ್ಗೂ ಗೆಲುವು ಕೈಹಿಡಿದ ಸೂಚನೆ ದಟ್ಟವಾಗಿ ಕಾಣಿಸಲಾರಂಭಿಸಿದೆ.